r/kannada_pusthakagalu

KWM #008 - After the writing exercise tomorrow, there will be a Q&A with Sagar Manjunatha about his short film We Were Stupid (Releasing on YouTube at 6pm today)
▲ 22 r/kannada_pusthakagalu+2 crossposts

KWM #008 - After the writing exercise tomorrow, there will be a Q&A with Sagar Manjunatha about his short film We Were Stupid (Releasing on YouTube at 6pm today)

Exact Location: (It's a canopy inside Cubbon Park): https://maps.app.goo.gl/wbA3P4xBfYcTQJey8

If you are coming by Metro, get down at the Vidhana Soudha stop.

See you all tomorrow!

EDIT (22-05-2026, 6.06pm):

Watch the Short Film 'We Were Stupid

https://www.youtube.com/watch?v=JTQ7n0LBeFk

u/adeno_gothilla — 24 hours ago

ಹಳೆಯ ಪುಸ್ತಕ ಹುಡುಕಲು ಸಹಾಯಕ್ಕಾಗಿ ಮನವಿ.

ಯಾರಾದರೂ ಬೆಂಗಳೂರು ವಾಸಿಗಳು ಈ ವಾರ ಸೆಕೆಂಡ್ ಹ್ಯಾಂಡ್ ಪುಸ್ತಕ ಮಳಿಗೆ ಅಥವಾ ಅವೆನ್ಯೂ ರಸ್ತೆ ಅಥವಾ ಲಾವಣ್ಯ ಪುಸ್ತಕ ಲೋಕದ ಕಡೆ ಹೋಗುವವರಿದ್ದರೆ ಮೆಸೇಜ್ ಮಾಡಿ. ಒಂದು ಪುಸ್ತಕಕ್ಕಾಗಿ ಹುಡುಕಾಡುತ್ತಿದ್ದೆ.

reddit.com
u/harry_bosch88 — 1 day ago
▲ 13 r/kannada_pusthakagalu+1 crossposts

S.L. ಭೈರಪ್ಪನವರ ಕಾದಂಬರಿ" ದೂರ ಸರಿದರು"ಮತ್ತು ನನ್ನ ಜೀವನ.

ಇದನ್ನು ಪೂರ್ತಿ ಓದಿ ನಿಮ್ಮ ಅಭಿಪ್ರಾಯ ತಿಳಿಸಿ.

ನಾನು ಬಹಳ ಸಂಪ್ರದಾಯಸ್ಥ ಮನೆತನದಿಂದ ಬಂದವನು. ಪ್ರೇಮ ಅನ್ನೋದು ನಮ್ಮ ಮನೆಯಲ್ಲಿ ಇರಲಿಲ್ಲ. ಸರಿ, ನಾನೂ ಕೂಡ ಅದರ ಬಗ್ಗೆ ಅಷ್ಟೊಂದು ಆಸಕ್ತಿ ಹೊಂದಿದ್ದವನಲ್ಲ.

ಆದರೆ ಒಂದು ದಿನ, ನಾನು ನನ್ನ ಎರಡನೇ ಸೆಮಿಸ್ಟರ್‌ನಲ್ಲಿ ಇರುವಾಗ, ರಸ್ತೆ ಬದಿಯಲ್ಲಿ ನನ್ನ ಗೆಳೆಯನ ಜೊತೆ ಮಾತನಾಡುತ್ತಾ ಹೋಗುತ್ತಿದ್ದೆ. ತಲೆಯೆತ್ತಿ ನೋಡಿದರೆ, ನನ್ನದೇ ತರಗತಿಯ ಒಬ್ಬ ಹುಡುಗಿ ನನ್ನನ್ನೇ ದಿಟ್ಟಿಸಿ ನೋಡುತ್ತಿದ್ದಳು. ನನಗೆ ಒಂದು ರೀತಿಯ ಮುಜುಗರವಾಯಿತು. ಏನು ಮಾಡಬೇಕು ಎಂಬುದೇ ಗೊತ್ತಾಗಲಿಲ್ಲ. ನಾನು ಆಕೆಯನ್ನು ಒಮ್ಮೆ ನೋಡಿ ತಲೆ ತಗ್ಗಿಸಿಕೊಂಡೆ.

ನಂತರ ಇದೇ ರೀತಿ, ನಾನು ಪಾಠ ಕೇಳುವಾಗಲೂ ಆಕೆ ನನ್ನನ್ನು ಕದ್ದು ನೋಡುವುದನ್ನು ಕೆಲವು ದಿನಗಳಲ್ಲಿ ಗಮನಿಸಿದೆ. ಕೆಲವೊಮ್ಮೆ ನನಗೆ ಬಹಳ ಮುಜುಗರವಾಗುತ್ತಿತ್ತು, ಕೆಲವೊಮ್ಮೆ ಬಹಳ ಸಂತೋಷವಾಗುತ್ತಿತ್ತು. ಆದರೆ ಇದಕ್ಕೆ ಹೇಗೆ ಪ್ರತಿಕ್ರಿಯಿಸಬೇಕು ಎಂದು ನನಗೆ ತಿಳಿಯಲಿಲ್ಲ.

ನಂತರ ಸೆಮಿಸ್ಟರ್ ಮುಗಿಯುವ ಸಮಯ ಬಂತು. ಈ ಸಲ ಕೂಡ ಆಕೆ ಕಿಟಕಿಯಿಂದ ನನ್ನನ್ನೇ ನೋಡುತ್ತಿದ್ದದ್ದು ಬಹುಶಃ ನಾನು ನನ್ನ ಜೀವನದಲ್ಲಿ ಮರೆಯಲಾರೆ.

(ನೆನಪಿರಲಿ — ಆಕೆ ನನ್ನನ್ನು ನೋಡುತ್ತಿದ್ದದ್ದು ಕೇವಲ ಕೆಲ ಕ್ಷಣಗಳ ದೃಷ್ಟಿಯಲ್ಲ, ನನ್ನನ್ನು ಅತ್ಯಂತ ಪ್ರೇಮದಿಂದ ನೋಡುತ್ತಿದ್ದಳು.)

ಸೆಮಿಸ್ಟರ್ ವಿರಾಮದಲ್ಲಿ ನಾನು ಬಹಳ ಯೋಚನೆ ಮಾಡಿ ಒಂದು ತೀರ್ಮಾನಕ್ಕೆ ಬಂದೆ. ನಾನು ಆಕೆಯ ಭಾವನೆಗಳನ್ನು ನಿರ್ಧರಿಸಲಾರೆ. ಆದ್ದರಿಂದ ಆಕೆಯನ್ನು ನೋಡುವುದನ್ನು ಕಡಿಮೆ ಮಾಡಬೇಕು ಎಂದುಕೊಂಡೆ.

ಮುಂದಿನ ಸೆಮಿಸ್ಟರ್ ಆರಂಭವಾದಾಗ ಹಾಗೆಯೇ ಮಾಡಿದೆ. ಈ ಸಮಯದಲ್ಲಿ ಆಕೆಯಲ್ಲೂ ಒಂದು ಬದಲಾವಣೆ ಕಂಡೆ. ಆಕೆಯೂ ಕೂಡ ನನ್ನನ್ನು ನೋಡುವುದನ್ನು ಬಹಳ ಕಡಿಮೆ ಮಾಡಿದ್ದಳು.

ಆದರೆ ನನಗೆ ತಿಳಿಯದೆ ಈ ಬಾರಿ ನಾನು ಆಕೆಯನ್ನು ಪ್ರೀತಿಸತೊಡಗಿದ್ದೆ. ಆರಂಭದಲ್ಲಿ ದೂರ ಸರಿಯಲು ಪ್ರಯತ್ನಿಸಿದ ನಾನು, ಈಗ ಆಕೆಯನ್ನೇ ನೋಡತೊಡಗಿದ್ದೆ. ನನ್ನ ಕಣ್ಣಿನಲ್ಲಿ ಪ್ರೀತಿ ಇತ್ತು.

ನಾನು ಆಕೆಯನ್ನು ನೋಡುತ್ತಿರುವುದನ್ನು ಗಮನಿಸಿದ ನಂತರ ಆಕೆಯೂ ನನ್ನನ್ನೇ ನೋಡತೊಡಗಿದಳು. ಆದರೆ ನಮ್ಮಿಬ್ಬರ ನಡುವೆ ಯಾವ ಮಾತೂ ನಡೆದಿರಲಿಲ್ಲ.

ಮುಂದಿನ ಸೆಮಿಸ್ಟರ್ ಆರಂಭವಾಯಿತು. ನಾವು ಒಬ್ಬರನ್ನೊಬ್ಬರು ಕಣ್ಣಿನ ಮೂಲಕವೇ ಪ್ರೀತಿಯಿಂದ ನೋಡುತ್ತಿದ್ದೆವು. ಇದು ನಮ್ಮಿಬ್ಬರ ಮಧ್ಯೆ ಮಾತ್ರ ನಡೆಯುತ್ತಿತ್ತು. ಉದಾಹರಣೆಗೆ, ನಾವು ಎದುರುಬದುರಾಗಿ ಬಂದಾಗ.

ಕೊನೆಗೆ ನಾನು ಧೈರ್ಯ ಮಾಡಿ ವಾಟ್ಸಾಪ್‌ನಲ್ಲಿ ಆಕೆಗೆ ಸಂದೇಶ ಕಳುಹಿಸಿದೆ. ಓದಿನ ವಿಷಯಕ್ಕೆ ಸಂಬಂಧಪಟ್ಟದ್ದನ್ನು ಮಾತ್ರ ಕೇಳಿದೆ. ಆಕೆಯೂ ಕೆಲವೊಮ್ಮೆ ವಿಷಯದ ಸಮಸ್ಯೆಗಳ ಬಗ್ಗೆ ಕೇಳುತ್ತಿದ್ದಳು, ನಾನು ಉತ್ತರಿಸುತ್ತಿದ್ದೆ.

ಹೀಗೆ ಆ ಸೆಮಿಸ್ಟರ್ ಕೂಡ ಯಾವುದೇ ವಿಶೇಷ ಮಾತಿಲ್ಲದೆ ಮುಗಿದುಹೋಯಿತು.

ಮುಂದಿನ ಸೆಮಿಸ್ಟರ್‌ನಲ್ಲಿ ಆಕೆ ನನ್ನಿಂದ ಬಹಳ ದೂರ ಇರತೊಡಗಿದಳು. ನನ್ನನ್ನು ನೋಡುವುದೇ ಕಡಿಮೆಯಾಯಿತು.

ಕೊನೆಗೆ ನಾನು ಧೈರ್ಯ ಮಾಡಿ ವಾಟ್ಸಾಪ್‌ನಲ್ಲಿ ಕೇಳಿದೆ:

"ನಿಮ್ಮ ಜೊತೆ ನಾನು ಮಾತನಾಡಬೇಕು. ನಾಳೆ ಕಾಲೇಜಿನಲ್ಲಿ ಸಿಗುತ್ತೀರಾ?"

ಅದಕ್ಕೆ ಆಕೆ, "ನನಗೆ ನಾಳೆ ಬೇರೆ ತರಗತಿ ಇದೆ. ಏನು ಹೇಳಬೇಕು ಇಲ್ಲೇ ಹೇಳಿ" ಎಂದಳು.

ಕೊನೆಗೆ ನಾನು ಹೇಳಿದೆ:

"ನನಗೆ ನೀವು ತುಂಬ ಇಷ್ಟ. ಆದರೆ ನಿಮಗೆ ನನ್ನ ಮೇಲೆ ಆಸಕ್ತಿ ಇಲ್ಲ ಅನಿಸುತ್ತದೆ. ನಾನು ಯಾವುದಾದರೂ ರೀತಿಯಲ್ಲಿ ನಿಮಗೆ ತೊಂದರೆ ಕೊಟ್ಟಿದ್ದರೆ ಕ್ಷಮಿಸಿ. ಇನ್ನು ಮುಂದೆ ನಾನು ನಿಮಗೆ ಯಾವ ರೀತಿಯ ತೊಂದರೆಯೂ ಕೊಡಲ್ಲ."

ಅದಕ್ಕೆ ಆಕೆ ಉತ್ತರಿಸಿದಳು:

"ನನಗೆ ಇಂತಹ ವಿಷಯಗಳಲ್ಲಿ ಆಸಕ್ತಿ ಇಲ್ಲ. ನೀವು ನನಗೆ ಯಾವುದೇ ತೊಂದರೆ ಕೊಟ್ಟಿಲ್ಲ."

ಆ ದಿನ ನಾನು ತುಂಬ ಅತ್ತೆ. ಆದರೆ ಆಕೆಯನ್ನು ಮರೆಯುವುದು ನನ್ನ ಕೈಯಲ್ಲಿ ಆಗಲಿಲ್ಲ.

ಈ ಕಥೆ ನಡೆದಿದ್ದು ಈಗ ಎರಡು ವರ್ಷಗಳಾಗಿದೆ. ಈಗ ನಾನು ಒಂದು Tier-1 ಶಿಕ್ಷಣ ಸಂಸ್ಥೆಯಲ್ಲಿ ಓದುತ್ತಿದ್ದೇನೆ. ಬಹುಶಃ ಆಕೆ ಎಲ್ಲೋ ಕೆಲಸ ಮಾಡುತ್ತಿದ್ದಾಳೆ. (ನಾನು ಒಂದು ವರ್ಷ ಮನೆಯಲ್ಲಿದ್ದು ಪರೀಕ್ಷೆಗೆ ತಯಾರಿ ನಡೆಸಿ ನಂತರ ಇಲ್ಲಿ ಬಂದೆ.)

ಆಕೆಯ ಮೊಬೈಲ್ ಸಂಖ್ಯೆ ನಾನು ಅಳಿಸಿದ್ದರೂ ವಾರದ ಹಿಂದೆ ಮತ್ತೆ ಸಿಕ್ಕಿತು. ನಾನು ಅದನ್ನು ಮತ್ತೆ ಉಳಿಸಿಕೊಂಡೆ. ಕೆಲವು ದಿನಗಳ ನಂತರ ಆಕೆಯ ವಾಟ್ಸಾಪ್ ಸ್ಟೇಟಸ್ ಕಾಣಿಸಿತು. ಅಂದರೆ ಬಹುಶಃ ಆಕೆಯೂ ನನ್ನ ಸಂಖ್ಯೆಯನ್ನು ಉಳಿಸಿಕೊಂಡಿರಬಹುದು.

ಈಗ ನನಗೆ ಮತ್ತೆ ಆಕೆಯ ಬಳಿ ಹೋಗುವ ಆಸಕ್ತಿ ಇಲ್ಲ. ಆದರೆ ಭಾವನೆಗಳನ್ನು ಕೆಲವೊಮ್ಮೆ ನಿಯಂತ್ರಿಸುವುದು ಕಷ್ಟವಾಗುತ್ತದೆ.

ಈ ಸಂದರ್ಭದಲ್ಲಿ ನಾನು ಎಸ್. ಎಲ್. ಭೈರಪ್ಪನವರ "ದೂರ ಸರಿದರು" ಓದಬೇಕು ಎಂದು ಯೋಚಿಸಿದ್ದೇನೆ. ನಾನು ಭೈರಪ್ಪನವರ ಬಹಳ ಕಾದಂಬರಿಗಳನ್ನು ಓದಿದ್ದೇನೆ; ಇದೊಂದನ್ನು ಮಾತ್ರ ಬಿಟ್ಟಿದ್ದೇನೆ.

ಆದರೆ ಒಂದು ಸಮಸ್ಯೆ ಇದೆ. ಅವರ ಕಾದಂಬರಿಗಳನ್ನು ಓದಿದ ಮೇಲೆ ಅದರಿಂದ ಹೊರಬರುವುದು ಕಷ್ಟವಾಗುತ್ತದೆ. ಕೆಲವೊಮ್ಮೆ ಅದು ನಮ್ಮ ಜೀವನದ ನಿರ್ಧಾರಗಳ ಮೇಲೆಯೂ ಪ್ರಭಾವ ಬೀರುತ್ತದೆ.

ಈ ಸಂದರ್ಭದಲ್ಲಿ ಆ ಕಾದಂಬರಿ ಓದುವುದು ಸೂಕ್ತವೇ? ನನ್ನ ಜೀವನಕ್ಕೆ ನಿಮ್ಮ ಯಾವುದೇ ಸಲಹೆ ಇದ್ದರೂ ಸ್ವಾಗತಾರ್ಹ.

reddit.com
u/Quirky_Tap_1729 — 3 days ago
▲ 18 r/kannada_pusthakagalu+2 crossposts

ANNOUNCEMENT - 8th Kannada Writers Meetup will be on Saturday, 11am at Cubbon Park!

We have a fun writing exercise lined up that can be done by aspiring writers/screenwriters & movie buffs/book readers alike.

Exact Location: (It's a canopy inside Cubbon Park): https://maps.app.goo.gl/2ArCnhB4x1ikFFdy7

If you are coming by Metro, get down at the Vidhana Soudha stop.

This meetup will be led by u/EmplysMushWashenss

See you all on Saturday!

P.S. Because of the rains, we don't know how many meetups we can organize in June & July. So, if you were planning to attend a meetup, this Saturday is a good time to turn up.

u/adeno_gothilla — 3 days ago

ಇಲ್ಲಿ ಯಾರಾದರೂ ಕುಮಾರವ್ಯಾಸ ವಿರಚಿತ ಕರ್ಣಾಟ ಭಾರತ ಕಥಾಮಂಜರಿ ಪೂರ್ತಿ ಓದಿದವರು ಇದ್ದೀರಾ?

reddit.com
u/Quirky_Tap_1729 — 3 days ago
▲ 68 r/kannada_pusthakagalu+4 crossposts

D.V. Gundappa: The inspiring legacy of Kannada's finest public intellectual (ರಾಷ್ಟ್ರಕ ಡಿ.ವಿ.ಜಿ.)

I translated a Kannada podcast episode discussing the life and legacy of D.V. Gundappa, who lived most of his life and executed most of his numerous endeavors in Bengaluru (Basavanagudi area to be specific). I put some links and pictures in the article as well of the areas in Bengaluru that were mentioned. Hope you all enjoy!

kannadakaranakannadaka.substack.com
u/bask3tballchess — 3 days ago

Words for internet era lingo

Have you come across kannada books that are set in post 2020 urban India/ Karnataka? If so please suggest. It's always a task to find good words for things derived from the internet. For example how would you translate doom-scrolling? Give ideazzz!

reddit.com
u/kanagilemara — 3 days ago

ಉತ್ತಮ ಕನ್ನಡ ಮಾದ್ಯಮ ಶಾಲೆಗಳು

ಈ ವರುಷ ನನ್ನ ಅಳಿಯನನ್ನು ೮ನೇ ತರಗತಿಗೆ ಸೇರಿಸಬೇಕು. ಅತ್ಯುತ್ತಮ ಕನ್ನಡ ಮಾದ್ಯಮ ಶಾಲೆಗಳನ್ನು ತಿಳಿಸುವಿರಾ. ನನಗೆ ಹೆಚ್ಚು percentage ಗಳಿಸುವುದೇನು ಮುಖ್ಯವಲ್ಲ.

ಉತ್ತಮ ಜ್ಞಾನ ಕೊಡುವ, ಉತ್ತಮ ಶಿಕ್ಷಕರಿರುವ, ಪ್ರಯೋಗ, ಕಲೆ, ವಿಜ್ಞಾನ, ಆಟೋಟ ಇರುವ ಖಾಸಗಿ ಅಥವಾ ಸರಕಾರಿ ಶಾಲೆಗಳನ್ನು ತಿಳಿಸಿ

reddit.com
u/F4C404 — 3 days ago

ನೀವು ಕನ್ನಡ ಪುಸ್ತಕಗಳನ್ನ ಕೊಳ್ಳಲು ಯಾವ Website ಬಳಸುತ್ತೀರಿ?

ನಾನು Sapna Online ಅನ್ನು ಬಳಸುತ್ತೇನೆ ಮೊದಲು Amazon ಅನ್ನು ಬಳಸುತ್ತಿದ್ದೆ ಆದರೆ ಅವರ Packaging ನೋಡಿ ಇನ್ನು ಇವರ ಸಾವಾಸ ಬೇಡ ಅನ್ನಿಸಿತು ನೀವು Amazon ಅಲ್ಲಿ ಪುಸ್ತಕಗಳನ್ನ ತರಸಬೇಡಿ

u/Putrid-Mistake-1610 — 5 days ago

Spiritual fiction in Kannada

I have heard that Kuvempu was a spiritually aware person and it reflected in his works. I have read none other than “ನನ್ನ ದೇವರು ಮತ್ತು ಇತರ ಕಥೆಗಳು” .

May I know which book by Kuvempu (fiction only) has deep spiritual insights with a beautiful story woven around it.

P.S : Also if you have read any spiritually sound fiction by any other writer, please recommend.

ಧನ್ಯವಾದಗಳು

reddit.com
u/Raw_reads — 6 days ago

ಸುಟ್ಟ ಚರಿತ್ರೆ, ಸುಂದರ ಪ್ರವಾಸ

ಕಲ್ಲಿನಲಿ ಕಾವ್ಯವನು ಕೆತ್ತಿದ ಪರಮೋಚ್ಚ ಜ್ಞಾನದ ಬೀಡು,

ಇಂದು ಬರೀ ಪ್ರವಾಸಿಗರ ಸೆಲ್ಫಿಗೆ ಸಿಲುಕಿದ ಅನಾಥ ಕಾಡು.

ಆರು ತಿಂಗಳು ಬೆಂಕಿಯಿಟ್ಟು ಗುಡಿ ಒಡೆದವರ ಹೆಸರೇಳಲು ಅಂಜಿಕೆ,

ಸತ್ಯವನು ಮುಚ್ಚಿಡುವ ಪಠ್ಯಪುಸ್ತಕಗಳೇ ಇಂದಿನ ಹೊಸ ನಂಬಿಕೆ.

ಸುಟ್ಟವರ ಮನ ನೋಯಬಾರದೆಂದು ಚರಿತ್ರೆಯನ್ನೇ ಅಳಿಸಿಹಾಕಿದೆವು,

ನಾವೆಷ್ಟು 'ಮುಂದುವರಿದೆವು' ಎಂದರೆ, ಗತವೈಭವಕ್ಕೇ ಮಣ್ಣುಹಾಕಿದೆವು.

ತುಂಗಭದ್ರೆಯ ಮೂಕ ರೋದನವನು ಅತಿ ಸುಲಭವಾಗಿ ಮರೆತುಬಿಡಿ,

ಭಗ್ನ ವಿಗ್ರಹಗಳ ಮುಂದೆಯೇ 'ಸಹಿಷ್ಣುತೆ'ಯ ಪಾಠವನು ಓದಿ ನಲಿರಿ!

ಅನಕೃ ರವರ ಪುಸ್ತಕಗಳನ್ನು ಓದಿ, ಎರಡು ದಿನ ಹಂಪೆಯಲ್ಲಿ ಕಳೆಯಬೇಕು ಎಂಬ ಆಸೆಯಿಂದ ಬಂದೆ, ಇಲ್ಲಿ ಇರುವದನ್ನು ನೋಡುವುದಕ್ಕಿಂತ ಇಲ್ಲವಾಗಿರುವುದೇ ಹೆಚ್ಚು ಕಾಡುತ್ತಿದೆ.

u/Due-Bother-586 — 7 days ago

ಭಾನುವಾರದ ಹರಟೆ - If you could commission an OTT web-series based on one Kannada short-story collection, which one would you pick?

u/adeno_gothilla — 6 days ago

ನನ್ನದೊಂದಾಸೆ

ನಮಸ್ಕಾರಗಳು

ನನ್ನ ಪೂರ್ಣ ವಿದ್ಯಾಭ್ಯಾಸ ಆಂಗ್ಲಭಾಷೆಯಲ್ಲಿ ಆಗಿದೆ. ನನ್ನ ವಿಚಾರಗಳೂ ಸಹ ಆಂಗ್ಲಭಾಷೆಯಲ್ಲಿವೆ. ಆದರೆ ನನಗೆ ಅದು ಬೇಡ. ನನ್ನ ಮಾತೃಭಾಷೆಯಾದ ಕನ್ನಡದಲ್ಲಿ ಓದುವುದು ಮತ್ತು ಬರೆಯುವುದು ನನ್ನ ಧಾರಾಳವಾದ ಬಯಕೆಯಾಗಿದೆ.

ಕನ್ನಡದಲ್ಲಿ ಓದುವ ನನ್ನ ವೇಗ ೫೦ ಶಬ್ದ/ನಿಮಿಷವಿದೆ. ವರ್ತಮಾನದಲ್ಲಿ ನಾನು ತೇಜೋ ತುಂಗಭದ್ರ ಕಾದಂಬರಿಯನ್ನು ಓದುತ್ತಿದ್ದೇನೆ.

ನನಗೆ ಮುಂಬರುವ ಕಾಲದಲ್ಲಿ ಅರ್ಥಪೂರ್ಣವಾಗಿ ಭೈರಪ್ಪ ಅವರ ಮತ್ತು ಕುವೆಂಪು ಅವರ ಕೃತಿಗಳನ್ನು ಓದುವ ಹಂಬಲ.

ದಯವಿಟ್ಟು ನನಗೆ ತಮ್ಮ ಅಭಿಪ್ರಾಯಗಳನ್ನು ಹೇಳಿ

Edit: ಸಲಹೆಗಳಿದ್ರೆ ಸಂತೋಷ 😁

reddit.com
u/FaceGreat2625 — 8 days ago

“ಅಜೇಯ” - ಪುಸ್ತಕ

Request: All of content is here my own thoughts, used AI to format in proper way that’s it. First time review kindly excuse for any unknown mistakes 🙏🏻

“ದಾರಿದ್ರ್ಯ ಮತ್ತು ಬಡತನದಲ್ಲೇ ಪ್ರತಿಭೆ ಅರಳುವುದು” ಇದು ನನ್ನ ಕಾಲೇಜ್ ನ ಕನ್ನಡ ಪ್ರಾಧ್ಯಾಪಕರು ಹೇಳುತ್ತಿದ್ದ ಮಾತು ಇಂದಿಗೂ ಅಂದರೆ 20 ವರ್ಷದ ನಂತರವು ನನ್ನ ಮನಸ್ಸಿನಲ್ಲಿ ಅಚ್ಚಾಗಿ ಉಳಿದಿದೆ. ಯಾಕೆ ಈ ಮಾತು ಹೇಳುತ್ತಾ ಇದೀನಿ ಅಂದರೆ ಇಂದು ನಾನು ವಿಮರ್ಶೆ ಮಾಡಲು ಪ್ರಯತ್ನ ಪಡುತ್ತಿರುವ ಪುಸ್ತಕದಲ್ಲಿ ಬರುವ ದೇಶ ಕಂಡ ಅತ್ಯಂತ ಶ್ರೇಷ್ಠ ಕ್ರಾಂತಿಕಾರಿ, ಭಾರತ ಮಾತೆಯ ಹೆಮ್ಮೆಯ ಪುತ್ರ “ಚಂದ್ರಶೇಖರ್ ಅಜಾದ್” ಅವರಿಗೆ ಮೇಲಿನ ವಾಕ್ಯ ಸರಿಯಾಗಿ ಹೊಂದುತ್ತದೆ.

ಚಂದ್ರಶೇಖರ ಆಜಾದ್ ಅವರ ಜೀವನ ಚರಿತ್ರೆಯನ್ನು ಆಧರಿಸಿ ಬರೆಯಲ್ಪಟ್ಟ ಈ ಕೃತಿ ನಿಜಕ್ಕೂ ಮನಸ್ಸನ್ನು ತಟ್ಟುವ ಅದ್ಭುತ ಬಯಾಗ್ರಫಿ ಆದರೂ ಒಂದು ಮನ ಕಲಕುವ ಕಾದಂಬರಿಯಂತೆ ಇದೆ . ಪುಸ್ತಕವನ್ನು ಓದಲು ಆರಂಭಿಸಿದ ನಂತರ ಅದನ್ನು ಕೈಯಿಂದ ಕೆಳಗಿಡಲು ನನಗೆ ಸಾಧ್ಯವಾಗಲಿಲ್ಲ. ಪ್ರತಿಯೊಂದು ಅಧ್ಯಾಯವೂ ಭಾವನೆಗಳಿಂದ ತುಂಬಿಕೊಂಡಿದ್ದು, ಓದುಗರನ್ನು ಆ ಕಾಲಘಟ್ಟದ ದೇಶಭಕ್ತಿಯ ಜ್ವಾಲೆಯೊಳಗೆ ಕರೆದೊಯ್ಯುತ್ತದೆ.

ಹಿಂದಿನ ಕಾಲದ ಜನರು ಭಾರತ ಮಾತೆಯಿಗಾಗಿ ತಮ್ಮ ಸಂಪೂರ್ಣ ಜೀವನವನ್ನೇ ಹೇಗೆ ನಿಸ್ವಾರ್ಥವಾಗಿ ತ್ಯಾಗ ಮಾಡುತ್ತಿದ್ದರು ಎಂಬುದನ್ನು ನೆನೆಸಿಕೊಂಡಾಗ ನಿಜಕ್ಕೂ ಆಶ್ಚರ್ಯವಾಗುತ್ತದೆ. ಇಂದಿನ ಕಾಲದಲ್ಲಿ ಅಂತಹ ತ್ಯಾಗ ಮನೋಭಾವವನ್ನು ಕಾಣುವುದು ಅಪರೂಪವೆನಿಸುತ್ತದೆ ಅಲ್ವಾ?? 😒🙏🏻

ಈ ಪುಸ್ತಕವು ಚಂದ್ರಶೇಖರ ಆಜಾದ್ ಅವರ ಬಡತನದ ಬಾಲ್ಯದಿಂದ ಆರಂಭವಾಗುತ್ತದೆ. ಅವರ ತಂದೆಯ ಸ್ವಾಭಿಮಾನ, ಎಷ್ಟೇ ಕಷ್ಟಗಳಿದ್ದರೂ ಯಾರ ಬಳಿಯೂ ಕೈಚಾಚದ ಅವರ ತಂದೆಯ ವ್ಯಕ್ತಿತ್ವ ಅಜಾದ್ ನ ಮನಸ್ಸಿನಲ್ಲಿ ಆಳವಾಗಿ ಉಳಿಯುತ್ತದೆ

ಪುಸ್ತಕದಲ್ಲಿನ ಅತ್ಯಂತ ಮನಮುಟ್ಟುವ ಘಟನೆಯೆಂದರೆ, ಕಿರಿಯ ವಯಸ್ಸಿನಲ್ಲಿಯೇ ಆಜಾದ್ ಒಬ್ಬ ಪೊಲೀಸ್ ಅಧಿಕಾರಿಗೆ ಕಲ್ಲು ಎಸೆದ ಕಾರಣ ನ್ಯಾಯಾಲಯದಿಂದ ಛಡಿ ಏಟಿನ ಶಿಕ್ಷೆಗೆ ಗುರಿಯಾಗುವ ಪ್ರಸಂಗ. ಕೇವಲ 14-15 ವರ್ಷದ ಬಾಲಕನಾಗಿದ್ದರೂ, ಆತ ಅಚ್ಚರಿಯ ಧೈರ್ಯದಿಂದ ಆ ಶಿಕ್ಷೆಯನ್ನು ಸಹಿಸುತ್ತಾನೆ. ಪ್ರತಿ ಹೊಡೆತದ ವೇಳೆಯೂ ತನ್ನ ತಾಯಿಯ ಹೆಸರನ್ನು ಹೇಳುವ ಬದಲು “ಭಾರತ ಮಾತಾ ಕಿ ಜೈ ” ಎಂದು ಘೋಷಿಸುವ ಆತನ ದೇಶಭಕ್ತಿ ಓದುಗರ ಮನಸ್ಸನ್ನು ನಡುಗಿಸುತ್ತದೆ. ಇನ್ನೂ ಆಶ್ಚರ್ಯಕರ ಸಂಗತಿಯೆಂದರೆ, “ಇದು ನಾನು ಪೊಲೀಸರ ಕೈಗೆ ಸಿಗುವುದು ಕೊನೆಯ ಬಾರಿ. ನನ್ನ ಜೀವಿತದಲ್ಲಿ ಮತ್ತೆಂದೂ ಬ್ರಿಟಿಷರ / ಪೊಲೀಸ್ ಕೈಗೆ ಸಿಕ್ಕಿಬೀಳುವುದಿಲ್ಲ” ಎಂದು ಆತ ನೀಡಿದ ಸವಾಲು.

ಮುಂದೆ ಚಂದ್ರಶೇಖರ ಆಜಾದ್ ಅನೇಕ ಕ್ರಾಂತಿಕಾರಿಗಳ ಮಾರ್ಗದರ್ಶಕರಾಗುತ್ತಾರೆ. ತಮ್ಮ ಸಹಚರರನ್ನು ತಮ್ಮ ತಮ್ಮನರಂತೆ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಆದರೆ ದುರಂತವೆಂದರೆ, ಅಂತಹ ಮಹಾನ್ ವ್ಯಕ್ತಿಗೆ ಸಹ ಕೆಲವರು ದ್ರೋಹ ಮಾಡುತ್ತಾರೆ.

ಬ್ರಿಟಿಷ್ ಸರ್ಕಾರದ ಹಣವನ್ನು ದೋಚಿ ಅದನ್ನು ಕ್ರಾಂತಿಕಾರರ ಚಟುವಟಿಕೆಗಳಿಗೆ ಬಳಸಿದ ಆಜಾದ್ ಅವರ ಸಾಹಸಗಳು ಪುಸ್ತಕದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಆದರೆ ಇನ್ನೂ ದೊಡ್ಡ ಸಂಗತಿ ಏನೆಂದರೆ, ತಮ್ಮ ಮುಂದೆಯೇ ಹಣವಿದ್ದರೂ ಅದನ್ನು ವೈಯಕ್ತಿಕವಾಗಿ ಬಳಸದೇ, “ಇದು ಭಾರತದ ಹಣ, ನಮ್ಮ ಹಣ ಅಲ್ಲ” ಎಂದು ಹೇಳಿ ಹಸಿವಿನಿಂದ ದಿನಗಳನ್ನು ಕಳೆಯುವ ಅವರ ಪ್ರಾಮಾಣಿಕತೆ. ಇಂದಿನ ಕಾಲದಲ್ಲಿ ಇಂತಹ ನಿಷ್ಠೆ ಮತ್ತು ದೇಶಭಕ್ತಿಯನ್ನು ನಿರೀಕ್ಷಿಸುವುದೇ ಕಷ್ಟವೆನಿಸುತ್ತದೆ.

ಚಂದ್ರಶೇಖರ ಆಜಾದ್ ಎಂಬ ಮಹಾನ್ ವ್ಯಕ್ತಿತ್ವವೇ ಒಂದು ಸುಂದರ ಉದ್ಯಾನವನದಂತಿತ್ತು. ಆ ಉದ್ಯಾನದಿಂದಲೇ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಎಂಬ ಅಮೂಲ್ಯ ಹೂಗಳು ಭಾರತಕ್ಕೆ ದೊರಕಿದವು.

ದುರದೃಷ್ಟವಶಾತ್, ಅಂತಹ ಮಹಾನ್ ಕ್ರಾಂತಿಕಾರಿಯ ಅಂತ್ಯವು ನಮ್ಮವರ ದ್ರೋಹದಿಂದಲೇ ಸಂಭವಿಸಿತು. ಆದರೂ ಕೊನೆಯ ಉಸಿರಿನವರೆಗೂ ಆತ ತನ್ನ ಮಾತಿಗೆ ಬದ್ಧನಾಗಿಯೇ ಉಳಿದ. “ಪೊಲೀಸರ ಕೈಗೆ ಜೀವಂತವಾಗಿ ಸಿಕ್ಕಿಬೀಳುವುದಿಲ್ಲ” ಎಂಬ ತನ್ನ ಪ್ರತಿಜ್ಞೆಯನ್ನು ಉಳಿಸಿಕೊಂಡು, ಕೊನೆಗೆ ತಾನೇ ತನ್ನನ್ನು ಗುಂಡಿಕ್ಕಿಕೊಂಡು ಅಮರನಾದ.

ಭಾವನೆ, ದೇಶಭಕ್ತಿ, ತ್ಯಾಗ ಮತ್ತು ಕ್ರಾಂತಿಯ ಜ್ವಾಲೆಯಿಂದ ಕೂಡಿದ ಈ ಪುಸ್ತಕವು ನಿಜಕ್ಕೂ ಪ್ರತಿಯೊಬ್ಬ ಭಾರತೀಯರೂ ಓದಲೇಬೇಕಾದ ಕೃತಿ. ಪೀಳಿಗೆಗಳಿಂದ ಪೀಳಿಗೆಗಳಿಗೆ ಈ ಕೃತಿ ತಲುಪಬೇಕು. ಚಂದ್ರಶೇಖರ ಆಜಾದ್ ಅವರಂತಹ ಮಹಾನ್ ಆತ್ಮರನ್ನು ಜೀವಂತವಾಗಿಡುವ ಶಕ್ತಿ ಈ ಪುಸ್ತಕದಲ್ಲಿದೆ.

u/SimhaSwapna — 9 days ago

One million footsteps - jeyamohan/ v iswarya

​

ಜೆಯಮೋಹನ್ ಕೃತಿಗಳೆಂದರೆ ಯಾವತ್ತಿಗೂ ವಿಶೇಷವೇ. ಇಪ್ಪತ್ತಾರು ಸಂಪುಟಗಳಲ್ಲಿ ಬಂದ ಮಹಾಭಾರತದ ಕತೆಯ ' ವೆನ್ಮರಸು' , ನಾವು ಯಾರಿಗೂ ಗೊತ್ತೇ ಇರದ ಭಿಕ್ಷುಕರ ಜಗತ್ತಿನ ' ತಳಾತಳ' , ಸಣ್ಣದಾದರೂ ಬಹಳ ಕಾಲ ಕಾಡುವ ' ನೂರು ಸಿಂಹಾಸನಗಳು', ಅವರ ಕೆಲವು ಕತೆಗಳ ಅನುವಾದ ' ಆನೆ ಡಾಕ್ಟರ್ ಮತ್ತು ಇತರ ಕತೆಗಳು' ಪ್ರತಿಯೊಂದೂ ವಿಶಿಷ್ಟವೇ. ಕೇರಳ ಮೂಲದ ತಂದೆ ತಾಯಿ ಇಬ್ಬರನ್ನೂ ‌ಕಳೆದುಕೊಂಡು ಆತ್ಮಹತ್ಯೆಗೆ ಎಳಸಿ ಕುಂಬಳೆ ರೈಲ್ವೆ ನಿಲ್ದಾಣದಲ್ಲಿ ನಿಂತ ಅವರ ಹೃದಯಬೇಧಕ ಕತೆಯುಳ್ಳ ' ಆಫ್ ಮೆನ್, ವಿಮೆನ್ ಆ್ಯಂಡ್ ವಿಚಸ್' ಇವೆಲ್ಲವೂ ವಿಶಿಷ್ಟ ಬಗೆಯ ಬರಹಗಳು. ನಮಗೆ ಕನ್ನಡಿಗರಿಗೆ ಅಥವಾ ಇಂಗ್ಲಿಷ್ ಅಲ್ಲಿ ಓದಲು ಬಯಸುವವರಿಗೆ ಅವರ ' ವೆನ್ಮರಸು' , ' ವಿಷ್ಣುಪುರಂ' ಇತ್ಯಾದಿ ಕೃತಿಗಳು ತಮಿಳಿನಲ್ಲಿ ಮಾತ್ರ ಲಭ್ಯ ಇರುವುದು ನಿರಾಸೆಯ ಸಂಗತಿ. ಆದರೆ ಈಗೀಗ ಅವರ ಕೃತಿಗಳ ಇಂಗ್ಲಿಷ್ ಅನುವಾದ ಬರುತ್ತಿರುವುದು ಖುಷಿಯ ಸಂಗತಿ. ಹಾಗಾಗಿ ಈ ಪುಸ್ತಕ ಬಂದ ಕೂಡಲೇ ಓದ ಹೊರಟೆ.

ಇದು ಅವರ ಇತರ ಕೃತಿಗಳ ಹಾದಿಯದಲ್ಲ. ಹೇಳಲು ಒಬ್ಬ ನಿವೃತ್ತ ಪೋಲಿಸ್ ಅಧಿಕಾರಿ ಕುಡಿತದ ಸಂಜೆಗಳಲ್ಲಿ ರಂಗೇರಿರುವ ಹೊತ್ತಲ್ಲಿ ಗೆಳೆಯರ ಜೊತೆ ಕೂತು ರಸಮಯವಾಗಿ ಹೇಳಿದ ಕತೆಗಳ ಹಾಗೆ ಕಂಡರೂ ಆಳದಲ್ಲಿ ಅವರ ಬರಹಗಳ ಮೂಲ ಮನುಷ್ಯ ಸ್ವಭಾವಗಳ ಕುರಿತಾದದ್ದೇ.

ಅದರಲ್ಲೂ ಇಲ್ಲಿರುವ ಕತೆಗಳಲ್ಲಿ ಎರಡು ಕತೆಗಳು ಮಂಗಳೂರು ಪರಿಸರದ್ದು.

ನಾಲ್ಕೂ ಕತೆಗಳ ಪರಿಸರ ವಿಭಿನ್ನ. ಸರ್ಕಸ್‌ನಲ್ಲಿ ಗುರಿಯಿಟ್ಟು ತಲೆಯ ಮೇಲಿಂದ ಆ್ಯಪಲ್ ಹಣ್ಣು ಎಗರಿಸುವ ಗುರಿಕಾರನ ಕತೆಯ ಚಾಣಾಕ್ಷತನ, ನೇತ್ರಾವತಿಯ ತೀರಕ್ಕೆ ಬಂದ ಶವದ ಕೈಯಲ್ಲಿ ಇದ್ದ ರೇಷ್ಮೆಯ ಎಳೆಯ ಜಾಡು, ಶಪಿತ ರಾಜಮನೆತನವೊಂದರ ಸದಸ್ಯರ ದುರಂತ ಅಂತ್ಯದ ಹಿಂದಿನ ಅಪರಾಧದ ಕತೆ,

ಕೊಲೆಯ ಕೇಸಿನ ಹಿಂದೆ ಬಿದ್ದು ಅದು ಕೊನೆಗೆ ತನಿಖಾಧಿಕಾರಿಯ ಬುಡಕ್ಕೇ ಬಂದು ನಿಲ್ಲುವ ಮತ್ತು ಎದೆ ನಡುಗಿಸುವ ಭಾವುಕ‌ ಕೊನೆಯುಳ್ಳ ಕತೆ

ಮತ್ತು ಕೊನೆಯ ಕತೆ ಸಾಮಾನ್ಯ ಚೈನ್ ಸ್ನಾಚಿಂಗ್ ಕೇಸ್ ಒಂದು ತೆಗೆದುಕೊಂಡ ಅಚ್ಚರಿಯ ತಿರುವುಗಳು ಅದರ ಆಳದ ಭಾವುಕ ನೆಲೆ ಇದನ್ನು ಸಾಮಾನ್ಯ ಕ್ರೈಮ್ ಕತೆಗಳಿಂದ ಬಹಳ ಮೇಲಕ್ಕೆ ಏರಿಸುತ್ತದೆ.

ಅದಲ್ಲದೆ ಇಲ್ಲಿ ಬರುವ ಸಂಭಾಷಣೆಗಳ ನೈಜತೆ ' ಆ ಕುಡಿಯದವನನ್ನು ಹತ್ತಿರ ಕೂರಿಸಬೇಡಿ. ಅವನು ಕುಡಿಯುವುದಿಲ್ಲ‌ ಆದರೆ ಕುಡಿಯುವವರ ಸೈಡ್ ಡಿಶ್ ಎಲ್ಲಾ ಖಾಲಿ ಮಾಡ್ತಾನೆ' ಎಂಬ ಸಂಭಾಷಣೆಗಳೆಲ್ಲ‌ ನಾವೂ ಕೇಳಿರುವಂತಹದ್ದೇ.

ಇದು ಬರಿಯ ಕ್ರೈಮ್ ಕತೆಗಳಲ್ಲ. ಒಂದೊಂದು ಕತೆಯೂ ದಕ್ಷಿಣದ ಒಂದೊಂದು ರಾಜ್ಯಗಳ ಇತಿಹಾಸದ ತುಣುಕೂ, ರಾಜಮನೆತನಗಳ ರಕ್ತಸಿಕ್ತ ಇತಿಹಾಸ, ಶಾಪಗಳೂ, ನಂಬಿಕೆಗಳೂ ,ಮಾನವ ಸಹಜ ದೌರ್ಬಲ್ಯಗಳನ್ನು ‌ತೋರಿಸುವ ಬಗೆ ಇಷ್ಟವಾಗುತ್ತದೆ.

ಜೆಯಮೋಹನ್ ನೀವು ಓದಬೇಕಾದ ಲೇಖಕ.

u/pra7373 — 9 days ago